?ಶತ್ರು? ಸಂಹಾರಕ್ಕೆ ಸಂಚು
Posted date: 18/May/2011

ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಪ್ರಥಮ ಬಾರಿಗೆ ಖಾಕಿ ಧರಿಸಿ ಕಂಗೊಳಿಸಲು ಮುಂದಾಗಿರುವ ಶ್ರೀ ಸಾಯಿರಾಂ ಪಿಕ್ಚರ‍್ಸ್ ಅವರ ಎಂ.ಡಿ. ಪ್ರಕಾಶ್ ನಿರ್ಮಾಣದ ’ಶತ್ರು’..........ಬಾಸ್ ಟು ಮಾಸ್ ಜೆ.ಕೆ ಅವರ ನಿರ್ದೇಶನದಲ್ಲಿ ಸವದತ್ತಿಯ ಒಂದು ಗ್ರಾಮದಲ್ಲಿ ಸತತವಾಗಿ ಚಿತ್ರೀಕರಣ ಮುಂದುವರೆಸಿದೆ. ಅದೊಂದು ಬರಡು ಭೂಮಿ. ಅಂತಹ ಸ್ಥಳದಲ್ಲಿ ಖಳನಿದ್ದಾನೆ. ಆತನ ಪಡೆಯನ್ನು ಚಾಣಾಕ್ಷದಿಂದ ಸೇರಿಕೊಂಡ ನಾಯಕ ಒಳಗೊಳಗೆ ಹೊಸೆಯುವ ತಂತ್ರಗಾರಿಕೆಯೇ ನಿರೂಪಣೆಯಲ್ಲಿ ವೈವಿಧ್ಯಮಯ ಎನ್ನುತ್ತಾರೆ ನಿರ್ದೇಶಕರು. ಈ ಭಾಗದ ಚಿತ್ರೀಕರಣದಲ್ಲಿ ಹುಬ್ಬಳ್ಳಿ ಹಾಗೂ ಧಾರವಾಢದಿಂದ ಅನೇಕ ರಂಗಭೂಮಿ ಕಲಾವಿದರನ್ನು ನಿರ್ದೇಶಕರು ಸಿನಿಮಾಕ್ಕಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಪ್ರತೀ ದಿವಸ ೧೫೦ ಸಹ ಕಲಾವಿದರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಈ ಚಿತ್ರಕ್ಕಾಗಿ ಒಂದು ಹೈ ವೋಲ್ಟೇಜ್ ಸಾಹಸ ಸನ್ನಿವೇಶಕ್ಕೆ ಥ್ರಿಲ್ಲರ್ ಮಂಜು ತಯಾರಿ ನಡೆಸುತ್ತಿದ್ದು ನಾಯಕನಟ ಪ್ರೇಮ್ ಯಾವುದೇ ಡ್ಯೂಪ್ ಇಲ್ಲದೆ ಭಾಗವಹಿಸಲು ತಿರ್ಮಾನಿಸಿದ್ದಾರೆ.

’ಶತ್ರು’ ಚಿತ್ರದ ನಾಯಕಿ ಡಿಂಪಲ್ ಚೋಪ್ರಾ. ರಮೇಶ್ ಭಟ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ತಬಲಾನಾಣಿ, ಬಿ.ಎಸ್. ಆನಂದ್, ಅರುಣ್ ದೇವಸ್ಯ ಪೋಷಕ ಪಾತ್ರಗಳಲ್ಲಿದ್ದಾರೆ. ಡಿ. ಶಿವಲಿಂಗ್ ಅವರ ಸಹನಿರ್ದೇಶನ, ಸುಧೀಂದ್ರ ಅವರ ನಿರ್ಮಾಣ ನಿರ್ವಹಣೆ, ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನ, ಮ್ಯಾಥ್ಯು ರಾಜನ್ ಛಾಯಾಗ್ರಹಣ, ಸುಜೀತ್ ಶೆಟ್ಟಿ ಅವರ ಸಂಗೀತ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed